Karnataka political scenario become interesting day by day. Particularly CM HD Kumaraswamy and former CM Siddaramaiah moves are very interesting. Here is analysis of political situation.
ನಾನೂ ಅದೇ ಸ್ಕೂಲ್ ನಲ್ಲಿ ಓದಿದ್ದು ಬಾರಪ್ಪಾ" ಅನ್ನೋ ಮಾತನ್ನು ನೀವು ಕೇಳಿದ್ದೀರಿ ಹಾಗೂ ಅದರ ಅರ್ಥ ನಿಮಗೆ ಆಗಿದೆ ಅನ್ನೋದಾದರೆ ಈ ವರದಿಯನ್ನು ದಾಟಿಸುವುದು ಸಲೀಸು. ಏಕೆಂದರೆ ರಾಜ್ಯ ರಾಜಕಾರಣದಲ್ಲಿ ಇದೇ ರೀತಿಯ ಸೇರಿಗೆ ಸವಾಸೇರು ಎಂಬ ಮೇಲಾಟ ನಡೆಯುತ್ತಿದೆ. ಒಂದು ಕಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ದೇವೇಗೌಡರು, ಮತ್ತೊಂದು ಕಡೆಗೆ ಸಿದ್ದರಾಮಯ್ಯ ಮತ್ತು ಬಣ.